ಪಶುಸಂಗೋಪನೆ
ಇಲಾಖೆಯ ಪರಿಚಯ:
ಜಿಲ್ಲೆಯು ಹೈನೋದ್ಯಮಕ್ಕೆ ಹೆಸರು ವಾಸಿಯಾಗಿದ್ದು, ಪಶುಸಂಗೋಪನಾ ಇಲಾಖೆಯು ಅಭಿವೃದ್ದಿ ಇಲಾಖೆಗಳಲ್ಲೊಂದಾಗಿದ್ದು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು, ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಮುಖ್ಯಪಶುವೈದ್ಯಾಧಿಕಾರಿಗಳು/, ಪಶುವೈದ್ಯಾಧಿಕಾರಿ ಹಾಗೂ ಗ್ರಾಮಾಂತರ ಪಶುವೈದ್ಯ ಸಂಸ್ಥೆಗಳಲ್ಲಿ ಪಶುವೈದ್ಯಕೀಯ ಪರೀಕ್ಷಕರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ/ತಾಲ್ಲೂಕು ಮಟ್ಟದ ಕಾರ್ಯಾಲಯಗಳಲ್ಲಿ ತಾಂತ್ರಿಕ / ಅರೆ ತಾಂತ್ರಿಕ / ಲಿಪಿಕ ವರ್ಗದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಡಿ, ಜಿಲ್ಲೆಯಲ್ಲಿ 1172 ಹಾಲು ಉತ್ಪಾದಕರ ಸಹಕಾರ ಸಂಘಗಳು ಅಸ್ಥಿತ್ವದಲ್ಲಿದ್ದು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮಾಹಿತಿ:
| ಕ್ರ.ಸಂ | ಅಧಿಕಾರಿಗಳ ಹೆಸರು ಮತ್ತು ಪದನಾಮ | ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ವಿವರ | ಮೊಬೈಲ್ ನಂ | ಇ-ಮೇಲ್ |
| 1 | ಡಾ.ಅಸಧುಲ್ಲಾ ಷರೀಫ್ |
ಉಪನಿರ್ದೇಶಕರು(ಆಡಳಿತ) ಉಪನಿರ್ದೇಶಕರ ಕಛೇರಿ, ಪಶುಪಾಲನಾ ಇಲಾಖೆ,ಬೆಂಗಳೂರು ದಕ್ಷಿಣ ಜಿಲ್ಲೆ |
9845459869 | ddeputydirector5@gmail.com |
| 2 | ಡಾ.ನಜೀರ್ ಅಹಮ್ಮದ್.ಎ |
ಮುಖ್ಯಪಶುವೈದ್ಯಾಧಿಕಾರಿ (ಆಡಳಿತ) ಮುಖ್ಯಪಶುವೈದ್ಯಾಧಿಕಾರಿಗಳ ಕಛೇರಿ, ಪಶುಪಾಲನಾ ಇಲಾಖೆ , ರಾಮನಗರ ತಾ. |
9972704768 | rmnramanagarnoahvs5@gmail.com |
| 3 |
ಡಾ.ಜಯಶ್ರೀ.ಇ.ಎಸ್ |
ಮಖ್ಯಪಶುವೈದ್ಯಾಧಿಕಾರಿ (ಆಡಳಿತ) (ಪ್ರಭಾರ) ಮುಖ್ಯಪಶುವೈದ್ಯಾಧಿಕಾರಿಗಳ ಕಛೇರಿ, ಪಶು ಆಸ್ಪತ್ರೆ, ಮಾಗಡಿ ತಾ. |
9535524087 | rmnmagadinoahvs.4@gmail.com |
| 4 |
ಡಾ.ಕೃಷ್ಣಮೂರ್ತಿ.ಪಿ |
ಮುಖ್ಯಪಶುವೈದ್ಯಾಧಿಕಾರಿ (ಆಡಳಿತ) ಮುಖ್ಯಪಶುವೈದ್ಯಾಧಿಕಾರಿಗಳ ಕಛೇರಿ, ಪಶು ಆಸ್ಪತ್ರೆ, ಚನ್ನಪಟ್ಟಣ ತಾ. |
9620644170 | rmnvhcpt@gmail.com |
| 5 |
ಡಾ.ಕುಮಾರ್ ಯು.ಸಿ
|
ಮುಖ್ಯಪಶುವೈದ್ಯಾಧಿಕಾರಿ (ಆಡಳಿತ) ಮುಖ್ಯಪಶುವೈದ್ಯಾಧಿಕಾರಿಗಳ ಕಛೇರಿ, ಪಶು ಆಸ್ಪತ್ರೆ, ಕನಕಪುರ ತಾ. |
8310540494 | cvovhkkp159@gmail.com |
ಜಿಲ್ಲೆಯಲ್ಲಿ ಉತ್ಪತ್ತಿಯಾಗುತ್ತಿರುವ ಜಾನುವಾರು ಉತ್ಪನ್ನಗಳ ಸರಾಸರಿ ವಾರ್ಷಿಕ ಪ್ರಮಾಣ
|
ಕ್ರ.ಸಂ |
ಉತ್ಪನ್ನಗಳ ವಿವರ |
ಪ್ರಮಾಣ |
|
1 |
ಹಾಲು |
3223.68 ಲಕ್ಷ ಲೀಟರ್ |
|
2 |
ಮಾಂಸ |
40.85 ಸಾವಿರ ಟನ್ |
|
3 |
ಮೊಟ್ಟೆ |
1340 ಲಕ್ಷ |
2018 ರ 20ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು ಜಾನುವಾರುಗಳ ಮಾಹಿತಿ.
|
ಕ್ರ.ಸಂ |
ಜಾನುವಾರುಗಳ ವಿವರ |
ಜಾನುವಾರುಗಳ ಸಾಕಾಣಿಕೆಯಲ್ಲಿ ತೊಡಗಿರುವ ಕುಟುಂಬಗಳ ಸಂಖ್ಯೆ |
ಜಾನುವಾರುಗಳ ಸಂಖ್ಯೆ |
|
1 |
ದನಗಳು |
70068 |
287502 |
|
2 |
ಎಮ್ಮೆ |
19058 |
19644 |
|
3 |
ಕುರಿ |
26261 |
127988 |
|
4 |
ಮೇಕೆ |
29590 |
150130 |
|
5 |
ಹಂದಿ |
118 |
7102 |
|
6 |
ನಾಯಿ |
– |
15341 |
|
7 |
ಮೊಲ |
– |
1071 |
|
8 |
ಇತರೆ |
– |
212 |
|
ಒಟ್ಟು |
145095 |
608990 |
|
|
|
ಕುಕ್ಕುಟ |
433(ಫಾರಂಗಳು) |
2356885 |
ಪಶುವೈದ್ಯ ಸಂಸ್ಥೆಗಳು ವಿವರ:
|
ಪಶುವೈದ್ಯ ಸಂಸ್ಥೆಗಳು |
ರಾಮನಗರ |
ಚನ್ನಪಟ್ಟಣ |
ಮಾಗಡಿ |
ಕನಕಪುರ |
ಒಟ್ಟು |
|
ಪಾಲಿಕ್ಲಿನಿಕ್ |
01 |
– |
– |
– |
01 |
|
ಪಶು ಆಸ್ಪತ್ರೆ |
03 |
04 |
04 |
06 |
17 |
|
ಪಶುಚಿಕಿತ್ಸಾಲಯ |
18 |
07 |
20 |
22 |
67 |
|
ಪ್ರಾ.ಪ.ಚಿ ಕೇಂದ್ರ |
08 |
13 |
04 |
11 |
36 |
|
ಸಂ.ಪ.ಚಿ |
01 |
01 |
01 |
01 |
04 |
|
ಒಟ್ಟು |
31 |
25 |
29 |
40 |
125 |
ಜಾನುವಾರುಗಳಿಗೆ ನೀಡುವ ಲಸಿಕೆಗಳ ವಿವರ.
ಜಾನುವಾರು ಆರೋಗ್ಯ ಸಂರಕ್ಷಣೆ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಕಾಲ ಕಾಲಕ್ಕೆ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ದಿನನಿತ್ಯ ಪಶುವೈದ್ಯ ಸಂಸ್ಥೆಗಳಲ್ಲಿ ಜಾನುವಾರುಗಳ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ರೈತ ಸಂದರ್ಶನ ಸಭೆಗಳನ್ನು ಕಾಲಕಾಲಕ್ಕೆ ಏರ್ಪಡಿಸಿ ಜಾನುವಾರು ಸಾಕಾಣಿಕೆ ಮತ್ತು ಉತ್ಪತ್ತಿ ಹಾಗೂ ಉತ್ಪನ್ನಗಳ ಹೆಚ್ಚಳಕ್ಕೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ ಹಾಗೂ ರೈತರಿಗೆ ಆಧುನಿಕ ಪಶುಪಾಲನೆ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಜಾನುವಾರುಗಳಲ್ಲಿ ಕಾಯಿಲೆ ಮರುಕಳಿಸದಂತೆ ತಡೆಯಲು ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ವರ್ಷಕ್ಕೆ ಎರಡು ಬಾರಿ (6 ತಿಂಗಳಿಗೊಮ್ಮೆ) ಹಮ್ಮಿಕೊಂಡು ರೋಗ ತಡೆಗಟ್ಟುವಲ್ಲಿ ಕಾರ್ಯತತ್ಪರವಾಗಿವೆ.
ಇಲಾಖಾವತಿಯಿಂದ ಇನ್ನಿತರೆ ಸಾಂಕ್ರಾಮಿಕ ರೋಗಗಳಾದ, ಚರ್ಮಗಂಟು ರೋಗ, ಗಳಲೆ ರೋಗ, ಚಪ್ಪೆ ರೋಗ ಹಾಗೂ ಕಂದು ರೋಗಕ್ಕೂ ಸಹ ಲಸಿಕೆಯನ್ನು ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಹಾಕಲಾಗುತ್ತಿದೆ. ಕುರಿ ಮತ್ತು ಮೇಕೆಗಳಲ್ಲಿ ಕ್ರಮವಾಗಿ ಕರುಳು ಬೇನೆ ಹಾಗೂ ಪಿ.ಪಿ.ಆರ್. ರೋಗ ಬಾರದಂತೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡು ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಕೋಳಿಗಳಿಗೆ ಕೊಕ್ಕರೆ ರೋಗದ ವಿರುದ್ದ ಲಸಿಕೆ, ನಾಯಿಗಳಿಗೆ ರೇಬೀಸ್ ಲಸಿಕೆ, ಹಂದಿಗಳಿಗೆ Classical Swine fever ಲಸಿಕೆ ಎಲ್ಲಾ ಪಶುವೈದ್ಯ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ.
ಕಾರ್ಯಕ್ರಮಗಳು ಮತ್ತು ಯೋಜನೆ:
ಆಕಸ್ಮಿಕ ಮರಣ ಹೊಂದಿದ ಕುರಿ/ಮೇಕೆಗಳಿಗೆ ರೂ.5000/- ಪರಿಹಾರ ಧನವನ್ನು ರೈತರಿಗೆ ಕೊಡಲಾಗುತ್ತಿದೆ.
ವಿಮೆ ಮಾಡಿಸದ ದೇಶಿ/ಮಿಶ್ರತಳಿಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಇಲಾಖಾವತಿಯಿಂದ ರೂ.10000/- ರೈತರಿಗೆ ಪರಿಹಾರ ಧನ ನೀಡಲಾಗುವುದು. ಪ್ರಸ್ತುತ ವರ್ಷದಲ್ಲಿ ಈವರೆವಿಗೂ ಸದರಿ ಯೋಜನೆಯಡಿ 617 ಪ್ರಸ್ತಾವನೆಗಳನ್ನು ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ.
ಪಶುವೈದ್ಯ ಸಂಸ್ಥೆಗಳಿಂದ ಬಹು ದೂರವಿರುವ ಗ್ರಾ,ಮಗಳಿಗೆ ಪಶುವೈದ್ಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ತಾಲ್ಲೂಕಿನಲ್ಲಿ ಒಂದರಂತೆ ಸಂಚಾರಿ ಪಶುಚಿಕಿತ್ಸಾಲಯ ವಾಹನಗಳು ಕಾರ್ಯನಿರ್ವಹಿಸುತ್ತಿರುತ್ತವೆ ಹಾಗೂ ರಾಮನಗರ ಜಿಲ್ಲೆಯಲ್ಲಿ ಒಟ್ಟು 06 ಸಂಚಾರಿ ಪಶುಚಿಕಿತ್ಸಾ ಘಟಕಗಳು (ಪಶು ಸಂಜೀವಿನಿ) ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ರೈತರು ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡಿದಲ್ಲಿ ರೈತರ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಪಶುವೈದ್ಯ ಸಂಸ್ಥೆಗಳಲ್ಲಿ ಪ್ರೋವನ್ ಬ್ರೀಡ್ ತಳಿಗಳಾದ ಹೆಚ್.ಎಫ್, ಜರ್ಸಿ, ಅಮೃತ್ ಮಹಲ್, ಸುರ್ತಿ, ಮುರಾ, ಘನೀಕೃತ ವೀರ್ಯ ನಳಿಕೆಗಳು ಮತ್ತು ಲಿಂಗ ನಿರ್ಧರಿತ ವೀರ್ಯನಗಳಿಕೆಗಳು ಲಭ್ಯವಿದ್ದು, ಪ್ರತಿ ವೀರ್ಯ ನಳಿಕೆಗೆ ರೂ.15/- ರಂತೆ ಸೇವಾ ಶುಲ್ಕವನ್ನು ರೈತರಿಂದ ಸಂಗ್ರಹಿಸಿ ಹಣವನ್ನು ಸರ್ಕಾರಕ್ಕೆ ಜಮಾ ಮಾಡಲಾಗುತ್ತಿದೆ. ರಾಸುಗಳಲ್ಲಿ ಕೃತಕ ಗರ್ಭಧಾರಣಾ ಮಾಡುವ ಕಾರ್ಯಕ್ರಮ ಪ್ರಚಲಿತದಲ್ಲಿದ್ದು, ಹೆಚ್ಚು ಹಾಲನ್ನು ನೀಡುವ ರಾಸುಗಳನ್ನು ಪಡೆಯಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸಿದ್ದು, ಹೈನುಗಾರಿಕೆ ಮೇಲೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ.
ಜಾನುವಾರುಗಳಲ್ಲಿ ಬರಡುತನವನ್ನು ಹೋಗಲಾಡಿಸಲು ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು ತಜ್ಞ ವೈದ್ಯರಿಂದ ಅಂತಹ ಜಾನುವಾರುಗಳನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಲಾಗುತ್ತಿದೆ. ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಏರ್ಪಡಿಸಿ ಕರುಗಳ ಪಾಲನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಉತ್ತಮ ತಳಿಗಳನ್ನು ಸಾಕಾಣಿಕೆ ಮಾಡಲು ಉತ್ತೇಜಿಸುವ ನಿಟ್ಟಿನಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ಜಿಲ್ಲೆಯಲ್ಲಿ ಮೇವಿನ ಕೊರತೆಯನ್ನು ನೀಗಿಸಲು ನೀರಾವರಿ ಸೌಲಭ್ಯವಿರುವ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಬರ ಪರಿಹಾರ ನಿಧಿಯಡಿ ಸೋರ್ಗಂ ಮಲ್ಟಿಕಟ್, ಆಫ್ರಿಕನ್ ಟಾಲ್ ಮ್ಯೇಜ್ (ಎ.ಟಿ.ಎಂ) ಹಾಗೂ ಇನ್ನಿತರ ಮೇವಿನ ಕಿರುಪೊಟ್ಟಣಗಳನ್ನು ಹಸಿರು ಮೇವು ಉತ್ಪಾದನೆಗಾಗಿ ರೈತರಿಗೆ ಉಚಿತವಾಗಿ ನೀಡಲಾಗಿದೆ.
ಹಾಲು ಉತ್ಪಾದಕರಿಗೆ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಪ್ರತಿ ಲೀಟರ್ ಗೆ ರೂ.5/- ರಂತೆ ಪ್ರೋತ್ಸಾಹಧನ ಒಟ್ಟು ರೂ.4869.85 ಲಕ್ಷಗಳು ಪ್ರಸ್ತುತ 2024-25 ನೇ ಸಾಲಿನಲ್ಲಿ ಹಾಲು ಉತ್ಪಾದಕರ ಖಾತೆಗೆ ಜಮಾ ಮಾಡಲಾಗಿದೆ.
ರೈತರಿಗೆ ಹಾಲುಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುವುದು. ಕುಕ್ಕುಟ ಮಂಡಳಿಯಿಂದ 6 ವಾರಗಳ ಕೋಳಿ ಮರಿಗಳನ್ನು ಹಂಚಿಕೆ ಮಾಡಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಲಭ ಬಡ್ಡಿದರದಲ್ಲಿ ಪಶುಪಾಲಕರಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮದಡಿ ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅಲ್ಪಾವಧಿ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸದುದ್ದೇಶ ಹೊಂದಿದೆ. ಈ ಯೋಜನೆಯಡಿ ಅವರ ಅಗತ್ಯತೆಗೆ ತಕ್ಕಂತೆ ದುಡಿಯುವ ಬಂಡವಾಳಕ್ಕೆ ಬ್ಯಾಂಕ್ಗಳಿಂದ ಆರ್ಥಿಕ ನೆರವು ಪಡೆಯಬಹುದಾಗಿದೆ.
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮ ಶೀಲತೆ ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯವನ್ನು ಪಡೆಯಬಹುದಾಗಿದೆ.