ಮುಚ್ಚಿ

ಸಾರ್ವಜನಿಕ ಶಿಕ್ಷಣ ಇಲಾಖೆ

ಇಲಾಖೆಯ ಪರಿಚಯ:

                ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಸುಲಭವಾಗಿ ಶೈಕ್ಷಣಿಕ ಅವಕಾಶ ಕಲ್ಪಿಸಲು ಪ್ರತಿ ಕಿಲೋ ಮೀಟರ್‍ಗೆ ಒಂದು ಪ್ರಾಥಮಿಕ, ಪ್ರತಿ 3 ಕಿಲೋ ಮೀಟರ್‍ಗೆ ಒಂದು ಹಿರಿಯ ಪ್ರಾಥಮಿಕ ಮತ್ತು ಪ್ರತಿ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ಪ್ರೌಢಶಾಲೆಯನ್ನು ತೆರೆಯಲು ಅವಕಾಶ ನೀಡಿದೆ. ಈ ದಿಶೆಯಲ್ಲಿ ಇತ್ತೀಚಿನ ಕಾರ್ಯಕ್ರಮ ಸಮಗ್ರ ಶಿಕ್ಷಣದ ಅಭಿಯಾನದ ಆಶಯದಂತೆ 6 ರಿಂದ 14 ವಯೋಮಾನದ ಎಲ್ಲಾ ಮಕ್ಕಳು ಶೇಕಡಾ 100 ರಷ್ಟು ಶಾಲೆಗೆ ದಾಖಲಾಗಬೇಕು. ಶಾಲೆಗೆ ದಾಖಲಾದ ಎಲ್ಲಾ ಮಕ್ಕಳೂ ಶಾಲೆಗೆ ಹಾಜರಾಗಿ ಉಳಿಯುವಂತಾಗಬೇಕು. ಗುಣಮಟ್ಟ ಶಿಕ್ಷಣದ ಅವಕಾಶದ ಮೂಲಕ ಪ್ರತೀ ಮಗುವೂ ತನ್ನನ್ನು ಕಲಿಕೆಯ ಕನಿಷ್ಠ ಮಟ್ಟ (ಎಂ.ಎಲ್.ಎಲ್.) ವನ್ನು ಸಾಧಿಸುವಂತೆ ಮಾಡುವುದು ಮತ್ತು ಭೌತಿಕ ಕಟ್ಟಡ, ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು ಮತ್ತು ಶೌಚಾಲಯಗಳು, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳು ಶಿಕ್ಷಕರ ನಡುವಿನ ಅನುಪಾತ ಇವುಗಳಲ್ಲಿ ಗಮನಾರ್ಹ ಸುಧಾರಣೆ ತರುವುದು.
ರಾಮನಗರ ಜಿಲ್ಲೆಯಲ್ಲಿ ಒಟ್ಟು 2305 ಜನವಸತಿ ಪ್ರದೇಶಗಳಿದ್ದು, ಅವುಗಳಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನೊಳಗೊಂಡಂತೆ ಒಟ್ಟು 821 ಕಿರಿಯ ಪ್ರಾಥಮಿಕ ಶಾಲೆಗಳು, 565 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 328 ಪ್ರೌಢಶಾಲೆಗಳು ಹಾಗೂ 01 ಕೇಂದ್ರೀಯ ವಿದ್ಯಾಲಯ ಶಾಲೆ, 01 ಜವಾಹರ್ ನವೋದಯ ಶಾಲೆ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 1716 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

 

ಧ್ಯೇಯ ಮತ್ತು ಉದ್ದೇಶಗಳು:
               ನಮ್ಮ ಜಿಲ್ಲೆಯ ಎಲ್ಲಾ ಮಕ್ಕಳನ್ನು ಉತ್ತಮ ಪ್ರಜೆಗಳಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮಕರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲ್ಯಗಳು, ಶಿಸ್ತು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ.

 

ಯೋಜನೆ ಮತ್ತು ಕಾರ್ಯಕ್ರಮಗಳು:

1. ಶಾಲೆಯಿಂದ ಹೊರಗುಳಿದ ಮಕ್ಕಳು (ಒ.ಒ.ಎಸ್.ಸಿ) :
           ಔಪಚಾರಿಕ ಶಾಲಾ ಶಿಕ್ಷಣ ವ್ಯವಸ್ಥೆಯಿಂದ ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾಗುವ 6 ರಿಂದ 14 ವರ್ಷ ವಯೋಮಾನದ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎನ್ನಬಹುದು. ಇತ್ತೀಚೆಗೆ ಇಲಾಖೆಯ ನಿರ್ದೇಶನದ ಪ್ರಕಾರ ಸತತವಾಗಿ ಏಳು ದಿನಗಳಿಗಿಂತ ಹೆಚ್ಚು ಗೈರು ಹಾಜರಾಗುವ ಮಕ್ಕಳನ್ನು ಸಹ ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ಪರಿಗಣಿಸಲು ಸೂಚಿಸಿದೆ.

2019-20ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಗತಿ ವಿವರ

ಕ್ರ.
ಸಂ

ತಾಲ್ಲೂಕಿನ ಹೆಸರು

ಗುರುತಿಸಲಾದ ಮಕ್ಕಳ ಸಂಖ್ಯೆ

 

ಮುಖ್ಯವಾಹಿನಿಗೆ ಬಂದ ಮಕ್ಕಳ ಸಂಖ್ಯೆ 

ಬಾಕಿ ಉಳಿದ ಮಕ್ಕಳ ಸಂಖ್ಯೆ

1

2

3

4

5

1

ಚನ್ನಪಟ್ಟಣ

129

96

33

2

ಕನಕಪುರ

149

58

91

3

ಮಾಗಡಿ

25

8

17

4

ರಾಮನಗರ

196

121

75

Total

499

283

216

2019-20ನೇ ಸಾಲಿನಲ್ಲಿ 6-13+ ವಯೋಮಾನ ಹೊಂದಿರುವ ಶಾಲೆಯಿಂದ ಹೊರಗುಳಿದ ಮಕ್ಕಳ ಹಾಗೂ ಮುಖ್ಯವಾಹಿನಿಗೆ ಬರದ ಮಕ್ಕಳ ವಿವರ

ಸಮಗ್ರ ಶಿಕ್ಷಣ ಕರ್ನಾಟಕ, ರಾಮನಗರ ಜಿಲ್ಲೆ, ರಾಮನಗರ
2019-20ನೇ ಸಾಲಿನಲ್ಲಿ 6 ರಿಂದ 14 ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ವಿವರಗಳು

ಕ್ರ. ಸಂ.

 ಶಾಲೆಯಿಂದ ಹೊರಗುಳಿದ ಮಕ್ಕಳ ಕಾರಣವಾರು

ಮುಖ್ಯವಾಹಿನಿಗೆ ಬಾರದ ಮಕ್ಕಳ ಸಂಖ್ಯೆ

ಚನ್ನಪಟ್ಟಣ    ಒಟ್ಟು

ಕನಕಪುರ

ಮಾಗಡಿ

ರಾಮನಗರ

ಒಟ್ಟು

1

ಮಕ್ಕಳು ನಿರಾಸಕ್ತಿ

 

4

 

8

12

2

ಮರಣ

 

2

1

4

7

3

ಇತರ ಗಳಿಕೆಯಲ್ಲಿ ತೊಡಗಿದವರು

1

     

1

4

ಕುಟುಂಬ ವಿವಾದ

 

1

1

 

2

5

ಮನೆ ಕೆಲಸ

 

8

 

1

9

6

ವಲಸೆ

32

45

14

49

140

7

ಅಲೆಮಾರಿಗಳು

 

1

   

1

8

ಪೋಷಕರ

ನಿರಾಸಕ್ತಿ

 

23

1

4

28

9

ಪ್ರೌಢವಸ್ಥೆ

     

1

1

10

ನಕಲು

 

4

 

7

11

11

ಮಾಹಿತಿ ಇಲ್ಲ

 

3

   

3

12

ಸಿಡಬ್ಲ್ಯೂಎಸ್ಎನ್ (ಎಮ್ಆರ್)

     

1

1

13

ಮದರಸಾ

     

15

0

 

Total

33

91

17

90

216

ರಾಮನಗರ ಜಿಲ್ಲೆಯಲ್ಲಿ ಶಾಲೆಯಿಂದ ಹೊಗುಳಿದ ಮಕ್ಕಳನ್ನು ಮುಖ್ಯ ಕಾರ್ಯವಾಹಿನಿಗೆ ತರಲು ಕೈಗೊಂಡ ಕಾರ್ಯ-ತಂತ್ರಗಳು.

1. ರಾಮನಗರ ಜಿಲ್ಲೆಯ ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ಉಳಿಯುವಂತೆ ಶಾಲಾ ಹಂತದಲ್ಲಿ ಪೋಷಕರ ಸಭೆ, ತಾಯಂದಿರ ಸಭೆಗಳ ಮೂಲಕ ಅರಿವು ಮೂಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.
2. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಮೂಲಕ ಪುನಃ ಶಾಲೆಗೆ ದಾಖಲಿಸಲು ಕ್ರಮಗಳನ್ನು ಅನುಸರಿಸಲಾಗುತ್ತಿದೆ.
3. ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ಸಿ.ಆರ್.ಪಿ ಗಳುಮನೆ ಮನೆ ಭೇಟಿ ಮಾಡಿಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಮಾಡಲಾಗಿದೆ.
4. ಸಮೀಕ್ಷೆಯ ನಂತರ ಹೋಬಳಿಗೊಬ್ಬರಂತೆ (ಇ.ಸಿ.ಓ/ಬಿ.ಆರ್.ಪಿ) ಹಾಜರಾತಿ ಪ್ರಾಧಿಕಾರಿಗಳನ್ನು ನೇಮಿಸಲಾಗಿದೆ.
5. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪ್ರತಿ ವಾರದ ಮಾಹಿತಿಯಲ್ಲಿ ಇಲಾಖೆಗೆ ಕಳುಹಿಸಿ ನಂತರ ಸಂಬಂಧಪಟ್ಟ ಇ.ಸಿ.ಓ.ಗಳು, ಓ.ಓ.ಎಸ್.ಸಿ.ಯ ವಿದ್ಯಾರ್ಥಿಯ ಪೋಷಕರಿಗೆ ನಮೂನೆ 5 ರಲ್ಲಿ ನೋಟೀಸ್
6. ನೀಡಿ ನಮೂನೆ 6 ರಲ್ಲಿ ಸ್ವೀಕೃತಿಯನ್ನು ಪಡೆದು ಪೋಷಕರು ಮತ್ತು ವಿದ್ಯಾರ್ಥಿಯ ಮನವೊಲಿಸಿ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ ಮುಖ್ಯವಾಹಿನಿಗೆ ತರಲಾಗುತ್ತಿದೆ.
7. ಇಲಾಖೆಯ ಕ್ರಮಗಳು, ಮುಖ್ಯ ಶಿಕ್ಷಕರ ಮತ್ತು ಸಿ.ಆರ್.ಪಿ ಗಳಿಂದÀ ಮನೆ ಭೇಟಿ.
8. ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳನ್ನು ವಿದ್ಯಾರ್ಥಿ ಮತ್ತು ಪೋಷಕರಿಗೆ ತಿಳಿಸಿ ಅವುಗಳ ಸಂಪೂರ್ಣ ಉಪಯೋಗ ಪಡೆಯುವಂತೆ ಮಾಡುವುದು ಹಾಗೂ ಹಲವಾರು ಸಾಧಕರ ಜೀವನ ಚರಿತ್ರೆಯನ್ನು ಹೇಳಿ ಅವರ ಮನಃಪರಿವರ್ತನೆಯನ್ನು ಮಾಡಿ ಮುಖ್ಯ ವಾಹಿನಿಗೆ ತರಲಾಗುತ್ತಿದೆ.
9. ಶಾಲಾಧಾರಿತ ತರಬೇತಿ ಆಯಾ ಶಾಲೆಗಳಲ್ಲಿ ಈ ಮಕ್ಕಳಿಗೆ ವಿಶೇಷ ಸಂತಸದಾಯಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
10. ವಸತಿ ನಿಲಯಗಳಿಗೆ ಸೇರಿಸುವುದು: ಆರ್ಥಿಕವಾಗಿ ಹಿಂದುಳಿದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮೊರಾರ್ಜಿ ವಸತಿ ನಿಲಯ, ಕಸ್ತೂರಿಬಾ ವಸತಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ವಸತಿ ನಿಲಯಗಳಿಗೆ ದಾಖಲಿಸಲಾಗುವುದು.
11. ಮಕ್ಕಳ ಕಲ್ಯಾಣ ಸಮಿತಿಯಿಂದ ಪೋಷಕರಿಗೆ ಅಗತ್ಯ ಕ್ರಮಗಳು.
12. ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ ಶಾಲೆಗಳಿಗೆ ಕರೆತರುವುದು.
13. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಸದಸ್ಯರು, ರೋಟರಿ ಸಂಸ್ಥೆ, ಲಯನ್ಸ್ ಕ್ಲಬ್ ಮುಂತಾದ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲಾಗುವುದು.

               ಒ.ಒ.ಎಸ್.ಸಿ                                                                             ಬಿ.ಆರ್.ಸಿ

                                                                               ಒ.ಒ.ಎಸ್.ಸಿ ಸಂಬಂಧ ಬಿ.ಆರ್.ಸಿ ಸಭೆಒ.ಒ.ಎಸ್.ಸಿ ಮಕ್ಕಳಿರುವ ಸ್ಥಳ ಸಮೀಕ್ಷೆ, ರಾಮನಗರ

2. ಆರ್.ಟಿ.ಇ.:
                  ಶಿಕ್ಷಣ ಹಕ್ಕು ಕಾಯ್ದೆಯು ಭಾರತೀಯ ಸಂವಿಧಾನ ಆರ್ಟಿಕಲ್ 21(ಎ) ಅಡಯಲ್ಲಿ 6 ರಿಂದ 14 ವರ್ಷ ವಯಸ್ಸಿನ ಪ್ರತಿ ಮಗುವಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಮದ ಏಪ್ರೀಲ್-01, 2010ರಂದು ಜಾರಿಗೆ ತರಲಾಯಿತು. 21(ಎ) ವಿಧಿಯಲ್ಲಿ ಪ್ರತಿ ಪಾದಿಸಿರುವಂತೆ ಈ ಮೂಲಭೂತ ಮಕ್ಕಳ ಹಕ್ಕನ್ನು ಕಾರ್ಯಗತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಬಾದ್ಯತೆಯನ್ನು ಹೊಂದಿದೆ.

Status of Compliance of Section 12 (1) (C) of RTE Act 2009 (2019-20)
Sl. No. Name of District Total no. of Private Unaided Schools (Recognised) in the State/ UT Total intake capacity in Class-I or below in all Private Unaided Schools (Recognised) 25% of the intake capacity in Class-I or below in all Private Unaided Schools (Recognised) Status of Admission of children as per Section 12 (1)(C) of RTE Act, 2009  in 2017-18
Nursery Class-I Total No. of Private Unaided Schools admitting children No. of Children admitted in Nursery in 2018 No. Of Children admitted in Class-I
2018
Total DISE code of the Schools
1 2 3 4 5 6 7 8 9 10 11 12
1 RAMANAGARA

168

32

6

2

8

3

6

2

8

29320806411, 29320812307

3. ನಲಿ-ಕಲಿ:

                 ನಲಿ-ಕಲಿ ಹೆಸರೇ ಸೂಚಿಸುವಂತೆ ಕಲಿಕೆಯು ಚಟುವಟಿಕೆಯುಕ್ತವಾಗಿದ್ದು ಬಹುತರಗತಿ, ವಿವಿಧ ಹಂತದ ಮಕ್ಕಳು ಸ್ವ-ವÉೀಗ ಮತ್ತು ಕ್ರಿಯಾತ್ಮಕವಾಗಿ ಕಲಿಯಲು ಅನುಕೂಲಕರವಾದ ಒಂದು ಬೋಧನಾ ವಿಧಾನವಾಗಿರುತ್ತದೆ. ಇದರಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿರುತ್ತಾರೆ. ತರಗತಿ ಪ್ರಕ್ರಿಯೆ ಹೆಚ್ಚು ಹಿತಕರವಾಗಿದ್ದು, ಯಾವುದೇ ಪರೀಕ್ಷೆಯ ಒತ್ತಡವಿಲ್ಲದೇ ತನ್ನದೇ ಕಲಿಕಾ ವೇಗದಲ್ಲಿ ಕಲಿಯಲು ಸ್ವತಂತ್ರವಾಗಿರುತ್ತದೆ.
                ನಲಿ-ಕಲಿ ವಿಧಾನದಲ್ಲಿ ಬಹುವರ್ಗ ತರಗತಿಗಳಲ್ಲಿ ಮಕ್ಕಳು ಓದುವುದು, ಬರೆಯುವುದನ್ನು ಕಲಿಯುವುದೇ ಅಲ್ಲದೆ ಸಂತಸದಾಯಕ ಮತ್ತು ಕುತೂಹಲಭರಿತ ವಾತಾವರಣದಲ್ಲಿ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸುವರು. 1 ಮತ್ತು 2ನೇ ತರಗತಿ ಮಕ್ಕಳಿಗೆ, 2009-10 ರಲ್ಲಿ ಕರ್ನಾಟಕದ ಎಲ್ಲ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ವಿಧಾನವನ್ನು ಆರಂಭಿಸಲಾಯಿತು. ಈ ವಿಧಾನದಲ್ಲಿ ಕಲಿಕೆಯ ಪ್ರಕ್ರಿಯೆಯುದ್ದಕ್ಕೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಶಿಕ್ಷಕರ ಹೊರೆ ಕಡಿಮೆಯಾಗುತ್ತಿದೆ, ತರಗತಿಯಲ್ಲಿನ ಅಂತರ್‍ಕ್ರಿಯಾತ್ಮಕ ಪ್ರಕ್ರಿಯೆಯು ಗರಿಷ್ಠವಾಗುವುದರಿಂದ ಪರೀಕ್ಷೆಯ ಭಯ / ಆತಂಕ ಇಲ್ಲದಂತಾಗಿದೆ. ಕುತೂಹಲ, ಚಲನಶೀಲತೆ ಮತ್ತು ಪರಿಶೋಧನೆಯಂತಹ ಮಗುವಿನ ಸಹಜ ಪ್ರವೃತ್ತಿಗಳು ಸರಿಯಾದ ದಾರಿಯಲ್ಲಿ ಮುಂದುವರೆಯಲು ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ.

  • ನಲಿ-ಕಲಿ ವಿಧಾನದ ತರಗತಿ ಪ್ರಕ್ರಿಯೆಯು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಕೊಡುವುದರ ಜೊತೆಗೆ ಸಂತಸ ಮತ್ತು ಸ್ನೇಹಪರತೆಯಿಂದ ಕಲಿಯಲು ಮಗುವಿಗೆ ಸರಿಯಾದ ವಾತಾವರಣವನ್ನು ಸೃಜಿಸಲಾಗಿದೆ.
  • ಕಲಿಕೆಯು ವಯಸ್ಸಿಗನುಗುಣವಾಗಿ ಸಾಮಥ್ರ್ಯಾನುಸಾರ ಮಾಡಲಾದ ಗುಂಪುಗಳಲ್ಲಿ ಅಂತರ್‍ಕ್ರಿಯಾತ್ಮಕ ಪ್ರಕ್ರಿಯೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದೆ.
  • ಮಕ್ಕಳು ಒಂದು ಗುಂಪಿನಲ್ಲಿ ನಿಗದಿತ ಸಾಮಥ್ರ್ಯವನ್ನು ಗಳಿಸಿಕೊಂಡ ಮೇಲೆ, ಮುಂದಿನ ಸಾಮಥ್ರ್ಯವನ್ನು ಕಲಿಯಲು ಅವರು ನಂತರದÀ ಗುಂಪಿಗೆ ಹೋಗುತ್ತಾರೆ.

    ನಲಿ-ಕಲಿ
                                                                                                                              ನಲಿ-ಕಲಿ ಶಾಲೆಯ ಕಲಿಕಾ ಚಪ್ಪರ

4. ಕರ್ನಾಟಕ ಪಬ್ಲಿಕ್ ಶಾಲೆ :

                      ಕರ್ನಾಟಕ ಸರ್ಕಾರವು”ಪ್ರತಿ ಮಗುವೂ ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ” ಎಂಬ ಘೋಷ ನೀತಿಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಮಗುವಿಗೂ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರಿಚಯಿಸಿದೆ. ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಶಿಕ್ಷಣದ ಹಂತದವರೆವಿಗೂ ಒಂದೇ ಸೂರಿನಡಿ ಈ ಶಾಲೆಗಳಲ್ಲಿ ಸಮಗ್ರ ಶಿಕ್ಷಣವನ್ನು ಒದಗಿಸಲಾಗುತ್ತಿದೆ.ಕರ್ನಾಟಕ ಪಬ್ಲಿಕ್ ಶಾಲೆಗಳಿಗೆಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗುವುದು. ಈ ಶಾಲೆಗೆ ಮೂಲಭೂತ ಸೌಕರ್ಯ, ಪ್ರಯೋಗಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಇತರೆ ಸಂಪನ್ಮೂಲಗಳನ್ನು ಒದಗಿಸುವುದರ ಮೂಲಕ ದಾಖಲಾತಿಯನ್ನು ಹೆಚ್ಚಿಸುವ ಮತ್ತು ಕಲಿಕೆಯನ್ನು ಉತ್ತಮ ಪಡಿಸುವುದರ ಜೊತೆಗೆ ಉನ್ನತ ಸಂಪನ್ಮೂಲ ಕೇಂದ್ರಗಳನ್ನಾಗಿ ಮಾರ್ಪಡಿಸುವುದು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಎಸ್. ಶಾಲೆಗಳ ಪಟ್ಟಿ
ಕ್ರ.
ಸಂ.
 ಜಿಲ್ಲೆಯ ಹೆಸರು ತಾಲ್ಲೂಕಿನ ಹೆಸರು ಕೆಪಿಎಸ್ ಶಾಲೆಯ ಹೆಸರು (ಪೂರ್ವ ಪ್ರಾಥಮಿಕ -12ನೇ ತರಗತಿವರೆಗೆ) ಮಕ್ಕಳ ಸಂಖ್ಯೆ
1 ರಾಮನಗರ ಚನ್ನಪಟ್ಟಣ ಕೆ.ಪಿ.ಎಸ್ ಅರಳಾಳುಸಂದ್ರ  613
2 ರಾಮನಗರ ಕನಕಪುರು ಕೆ.ಪಿ.ಎಸ್ ಹಾರೋಹಳ್ಳಿ 1018
3 ರಾಮನಗರ ಕನಕಪುರು ಕೆ.ಪಿ.ಎಸ್ ದೊಡ್ಡಾಲಹಳ್ಳಿ 419
4 ರಾಮನಗರ ಮಾಗಡಿ ಕೆ.ಪಿ.ಎಸ್ ಕುದೂರು 1272
5 ರಾಮನಗರ ಮಾಗಡಿ ಕೆ.ಪಿ.ಎಸ್ ತಿಪ್ಪಸಂದ್ರ 362
6 ರಾಮನಗರ ರಾಮನಗರ ಕೆ.ಪಿ.ಎಸ್ ಅವ್ವೇರಹಳ್ಳಿ 430

ಕೆ.ಪಿ.ಎಸ್ ಶಾಲೆ ಅರಳಾಳುಸಂದ್ರ                                                                ಕೆ.ಪಿ.ಎಸ್ ಶಾಲೆ ದೊಡ್ಡಾಲಹಳ್ಳಿ,

             ಕೆ.ಪಿ.ಎಸ್ ಶಾಲೆ ಅರಳಾಳುಸಂದ್ರ, ಚನ್ನಪಟ್ಟಣ ತಾಲ್ಲೂಕು                                              ಕೆ.ಪಿ.ಎಸ್ ಶಾಲೆ ದೊಡ್ಡಾಲಹಳ್ಳಿ, ಕನಕಪುರ ತಾಲ್ಲೂಕು

5. ಆಂಗ್ಲ ಮಾಧ್ಯಮ ಶಾಲೆಗಳು:
         2019-20ನೇ ಸಾಲಿನಲ್ಲಿ ಪ್ರಸ್ತುತ 24 ಆಂಗ್ಲ ಮಾಧ್ಯಮ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ಹಾಗೂ ಶಾಲಾ ಕೊಠಡಿಗಳ ಅವಶ್ಯಕತೆ ಇದ್ದು ಈ ಕೆಳಗಿನಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ.

ಕ್ರ.
ಸಂ.

ತಾಲ್ಲೂಕಿನ ಹೆಸರು

ಶಾಲೆಯ ಹೆಸರು

 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ದಾಖಲಾತಿ

1

ಚನ್ನಪಟ್ಟಣ

ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ಹಳೇ ಡೇರಾ (ಆರ್.ಎಂ.ಎಸ್.ಎ)

16

2

ಚನ್ನಪಟ್ಟಣ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನಿಯಪ್ಪನದೊಡ್ಡಿ (ಆರ್.ಎಂ.ಎಸ್.ಎ)

28

3

ಚನ್ನಪಟ್ಟಣ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹೊಂಗನೂರು

36

4

ಚನ್ನಪಟ್ಟಣ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕೆರೆ

37

5

ಚನ್ನಪಟ್ಟಣ

ಸರ್ಕಾರಿ ಪ್ರೌಢಶಾಲೆ ಅರಳಾಳುಸಂದ್ರ

33

6

ಚನ್ನಪಟ್ಟಣ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೋಕೊಪ್ಪ

15

7

ಚನ್ನಪಟ್ಟಣ

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಂ.ಎನ್ ಹೊಸಹಳ್ಳಿ

27

8

ಚನ್ನಪಟ್ಟಣ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮಂಗಳವಾರಪೇಟೆ

25

9

ಚನ್ನಪಟ್ಟಣ

ಕರ್ನಾಟಕ ಪಬ್ಲಿಕ್ ಶಾಲೆ ಕೋಡಂಬಳ್ಳಿ

23

10

ಕನಕಪುರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಕಲ್ಬಾಳು

34

11

ಕನಕಪುರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚಲು

17

12

ಕನಕಪುರ

ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಬಾಲಕರ ಶಾಲೆ -02

30

13

ಕನಕಪುರ

ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ದೊಡ್ಡಾಲಹಳ್ಳಿ

30

14

ಮಾಗಡಿ

ಸರ್ಕಾರಿ ಪದವಿ ಪೂರ್ವ ಕಾಲೇಜು ಕುದೂರು

40

15

ಮಾಗಡಿ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತಿಪ್ಪಸಂದ್ರ

41

16

ರಾಮನಗರ

ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ರಾಮನಗರ

40

17

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ವೇರಹಳ್ಳಿ

27

18

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐಜೂರು ಕನ್ನಡ

58

19

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾನುಭೋಗನಹಳ್ಳಿ

30

20

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಲಾಂಚ

25

21

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಲಮಂಗಲ

48

22

ರಾಮನಗರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನಮಾನಹಳ್ಳಿ

18

23

 

ಕನಕಪುರ

ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ದೊಡ್ಡ ಮರಳವಾಡಿ

21

24

 

ಕನಕಪುರ

ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾರೋಹಳ್ಳಿ

30

ಒಟ್ಟು

729

6. ಕಲಾ ಉತ್ಸವ:

                      ಭಾರತದ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮತ್ತು ಅದರ ವೈವಿಧ್ಯತೆಯ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸಂಗೀತ, ರಂಗಕಲೆ, ನೃತ್ಯ, ದೃಶ್ಯಕಲೆಗಳಲ್ಲಿ ರಂಗೋತ್ಸವವನ್ನು ಕ್ಲಸ್ಟರ್ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಜಾನಪದ, ಪಾರಂಪರಿಕ ಕಲಾ ಪ್ರಾಕಾರಗಳನ್ನು ಉಳಿಸಲು ಮತ್ತು ಬೆಳೆಸಲು ಈ ಉತ್ಸವವು ಜೀವದಾಯಕವಾಗಿದೆ. ಇದರಿಂದಾಗಿ ಪ್ರತಿಯೊಬ್ಬ ಮಗುವೂ ವಿಭಿನ್ನ ಸಂಸ್ಕøತಿಗಳ ರೋಮಾಂಚಕ ಸೌಂದರ್ಯವನ್ನು ಅನುಭವಿಸುತ್ತದೆ.
                     “ಏಕ್ ಭಾರತ್ ಶ್ರೇಷ್ಠ ಭಾರತ್” ಗುರಿಗಳನ್ನು ಸಾಧಿಸಲು ಯೋಜಿತ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಏಕೀಕರಣದ ಮನೋಭಾವವನ್ನು ಉತ್ತೇಜಿಸಲಾಗುತ್ತಿದೆ. ಶಾಲೆಗಳಲ್ಲಿ ಸಂತೋಷದಾಯಕ ಕಲಿಕೆಯ ವಾತಾವರಣವನ್ನು ಉತ್ತೇಜಿಸಲು ಅಧಿವೇಶನದುದ್ದಕ್ಕೂ ದಿನನಿತ್ಯದ ಶಾಲಾ ದಿನಚರಿಯಲ್ಲಿ ಕಲೆಗಳನ್ನು ಸಂಯೋಜಿಸಲು ಪ್ರೋತ್ಸಾಹಿಸಲು ಸಹಾಯಕವಾಗುತ್ತದೆ.
                   ಪ್ರತಿಭಾ ಕಾರಂಜಿ                                                                    ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
                                                                                           ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಐ ಗೊಲ್ಲಹಳ್ಳಿ ಕನಕಪುರ ತಾಲ್ಲೂಕು

7. ಮಕ್ಕಳ ವಿಜ್ಞಾನ ಹಬ್ಬ:

                    ಮಕ್ಕಳ ವಿಜ್ಞಾನ ಹಬ್ಬವು ವೈಜ್ಞಾನಿಕ ವಿಚಾರಣೆಯ ಮೂಲಭೂತ ಅಂಶಗಳಾದ ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಸಂವಾದ, ವೀಕ್ಷಣೆ ಮತ್ತು ಪ್ರಾತ್ಯಕ್ಷಿಕ ವಿಧಾನದ ಮೂಲಕ ಪರಿಕಲ್ಪನೆಗಳ ಮೂಲಕ ಅರ್ಥೈಸುವಿಕೆಗೆ ಅನುಕೂಲವಾಗುವ ಯೋಜನೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುವುದು. ಹಬ್ಬವು ಸಮುದಾಯವನ್ನು ಕಾರ್ಯಕ್ರಮದ ಪರಿಕಲ್ಪನೆಗೆ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಮಕ್ಕಳ ಹಬ್ಬ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿಜ್ಞಾನ ಪ್ರಯೋಗಗಳು, ವಿಜ್ಞಾನಿಗಳೊಂದಿಗೆ ಸಂವಾದ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ.

     ಮಕ್ಕಳ ವಿಜ್ಞಾನ ಹಬ್ಬದ ಉದ್ದೇಶಗಳು:      

  • ಮಕ್ಕಳು ಸ್ವತಃ ಮಾಡಿ ಆಡುತ್ತಾ ಯೋಚಿಸಿ ಕಲಿಯಲು ಮತ್ತು ಖುಷಿ ಪಡಲು ಇಂಬುಗೊಡುವ ಚಟುವಟಿಕೆಗಳ ಮೂಲಕ ಕಲಿಯುವಂತಹ ವಾತಾವರಣ ನಿರ್ಮಿಸುವುದು.
  •      

  • ಹೊಸದರ ಹುಡುಕಾಟಕ್ಕೆ ಅವಕಾಶ, ಯೋಚಿಸಲು, ರಚಿಸಲು, ಪ್ರಶ್ನೆ ಕೇಳಿ ತಿಳಿದುಕೊಳ್ಳಲು ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದು.

                                  ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ                                                  ಕ್ಲಸ್ಟರ್

                                ರಾಮನಗರ ತಾಲ್ಲೂಕಿನ ರಾಮನಗರ ಟೌನ್-2 ನ ಬಾಲಗೇರಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

8. ಪರಿಹಾರ ಬೋಧನೆ:

                   ಪರಿಹಾರ ಬೋಧನೆ ಎಂದರೆ ಪಾಠಗಳ ಪುನರಾವರ್ತನೆ ಅಲ್ಲ, ಮಗುವಿನ ಕಲಿಕಾ ನ್ಯೂನತೆಯನ್ನು ಗುರುತಿಸಿ, ನೈದಾನಿಕ ಕ್ರಮದಲ್ಲಿ ಕಲಿಕೆ ಆಗುವಂತೆ ಮಾಡುವ ಚಿಕಿತ್ಸಾ ಬೋಧನಾ ಕ್ರಮವಾಗಿದೆ.

ಕಲಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮ (ಎಲ್.ಇ. ಪಿ):  ಪ್ರಾಥಮಿಕ ಹಂತಗಳಲ್ಲಿ ವಿದ್ಯಾರ್ಥಿಗಳು ಸ್ವ-ವೇಗದಲ್ಲಿ, ಕ್ರಿಯಾತ್ಮಕವಾಗಿ, ಪ್ರಾಯೋಗಿಕವಾಗಿ, ಸಂತೋಷದಾಯಕವಾಗಿ ಕಲಿಯಲು ರೂಪಿಸಿರುವ ಒಂದು ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ ಮತ್ತು ಸಂಖ್ಯಾ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಕಲಿಕಾ ತೊಂದರೆಗಳನ್ನು ಗುರುತಿಸಿ, ವೈಯ್ಯಕ್ತಿಕ ಭಿನ್ನತೆಗಳನ್ನು ಗಮನಿಸಿ ಕಲಿಕಾ ತೊಡಕುಗಳನ್ನು ದೂರಮಾಡುವಲ್ಲಿ ಯೋಜನೆಯನ್ನು ತಯಾರಿಸಿ ಕಲಿಕಾ ಪ್ರಕ್ರಿಯೆ ಸುಲಭಗೊಳಿಸಲಾಗಿದೆ.

(ಜಿ.ಕೆ.ಎಂ.ಪಿ.ಎಸ್)

                                                             2019-20 ನೇ ಸಾಲಿನಲ್ಲಿ (ಜಿ.ಕೆ.ಎಂ.ಪಿ.ಎಸ್) ಸ.ಮಾ.ಹಿ.ಪ್ರಾ.ಶಾಲೆ ರಾಮನಗರ ಇಲ್ಲಿ ನಡೆದ ಬೇಸಿಗೆ ಸಂಭ್ರಮ

9. ಪೂರ್ವ ಪ್ರಾಥಮಿಕ ಶಾಲೆ:

                       2017-18 ಹಾಗೂ 2018-19ನೇ ಸಾಲಿನಿಂದ ಸರ್ಕಾರಿ ಶಾಲೆಗಳ ಉನ್ನತೀಕರಣ, ಗುಣಮಟ್ಟ ಸಾಧನೆ, ಬಲವರ್ಧನೆಗಾಗಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಗರಿಷ್ಠ 30 ವಿದ್ಯಾರ್ಥಿಗಳು ದಾಖಲಾತಿ ಮಿತಿಯೊಂದಿಗೆÀ ಆರಂಭಿಸಲು ಅನುಮೋದಿಸಿದೆ.
ಕೆ.ಪಿ.ಎಸ್ ಶಾಲೆ ಅರಳಾಳುಸಂದ್ರ
                                                                                                               ಕೆ.ಪಿ.ಎಸ್ ಶಾಲೆ ಅರಳಾಳುಸಂದ್ರ, ಚನ್ನಪಟ್ಟಣ

10. ಇಕೋ-ಕ್ಲಬ್ ಗಳ ಚಟುವಟಿಕೆಗಳು: 

          ಇಕೋ-ಕ್ಲಬ್ ಅನುಷ್ಠಾನದ ಪ್ರಮುಖ ಅಂಶಗಳು
           “ರಾಷ್ಟ್ರೀಯ ಹಸಿರು ಪಡೆ” (ಓಚಿಣioಟಿಚಿಟ ಉಡಿeeಟಿ ಅoಡಿಠಿs) ಅಡಿಯಲ್ಲಿ ಆಯ್ಕೆ ಮಾಡಿರುವ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಸರ್ಕಾರಿ ಪ್ರೌಢಶಾಲೆಗಳು ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಶಾಲಾ ಸ್ವಚ್ಛತೆ, ಶಾಲೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವುದು, ಶಾಲಾ ಆವರಣದಲ್ಲಿ ಕೈತೋಟ, ಔಷಧೀಯ ಸಸ್ಯಗಳನ್ನು ಬೆಳೆಸುವುದು. ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ಮಕ್ಕಳ ಮೂಲಕ ಸಾಮಾಜಿಕ ಅರಿವು ಮೂಡಿಸುವುದು ಇಕೋ-ಕ್ಲಬ್‍ನ ಪ್ರಮುಖ ಉದ್ದೇಶವಾಗಿರುತ್ತದೆ.

                     eco                                                      eco

11. ಸಂವಿಧಾನ ದಿನ:

ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಪ್ರದರ್ಶಿಸಲಾಗಿರುವ ಶಾಲೆಗಳ ಪಟ್ಟಿ:

ಕ್ರ.ಸಂ

ದಿನಾಂಕ

ತಾಲ್ಲೂಕು

ಸಂವಿಧಾನ ದಿನಾಚರಣೆ ಆಚರಿಸಿದ ಶಾಲೆಗಳ ಸಂಖ್ಯೆ

ಭಾಗವಹಿಸಿದ ಒಟ್ಟು ವಿದ್ಯಾರ್ಥಿಗಳು

1

26.11.2019

ಚನ್ನಪಟ್ಟಣ

323

18320

2

ಕನಕಪುರ

564

42398

3

ಮಾಗಡಿ

448

26916

4

ರಾಮನಗರ

407

42174

   

ಒಟ್ಟು

1742

129808

  • ಸಂವಿಧಾನ ದಿನವನ್ನು ವರ್ಷಪೂರ್ತಿ ಕಾನೂನು ಅರಿವು ಕಾರ್ಯಕ್ರಮಗಳು, ಪ್ರಬಂಧ ಸ್ಪರ್ದೆ, ಚಿತ್ರ ಕಲಾ ಸ್ಪರ್ದೆ, ಹಿರಿಯ ಸ್ವತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವುದು, ಚರ್ಚಾ ಸ್ಪರ್ಧೆಗಳ ಆಯೋಜನೆ, ಸಂವಿಧಾನ ರಚನಾ ಸಮಿತಿಯ ಪರಿಚಯ, ಸಂವಿಧಾನ ಸಂಬಂಧಿ ವಿವಿಧ ಪುಸ್ತಕಗಳ ಪರಿಚಯ, ಕೋರ್ಟ್, ಪೋಲೀಸ್ ಠಾಣೆ ಮುಂತಾದ ಸ್ಥಳ ಭೇಟಿ ಮಾಡಲಾಗುತ್ತದೆ.
  • ಪ್ರತಿ ದಿನ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಲಾಗುತ್ತಿದೆ.

ಸಂವಿಧಾನದ

12. ಎನ್.ಎಸ್.ಕ್ಯೂ.ಎಫ್,:

 ಅಗಾಧ ಜನಸಂಖ್ಯೆಯನ್ನು ಹೊಂದಿರುವ ಭಾರತದೇಶದಲ್ಲಿ ಮುಂದುವರೆದ ರಾಷ್ಟ್ರಗಳಂತೆ ಎಲ್ಲರಿಗೂ ಉದ್ಯೋಗ ನೀಡುವ ಮೂಲಕ ದೇಶವನ್ನು ಶ್ರೀಮಂತಗೊಳಿಸುವುದು ಅವಶ್ಯಕವಾಗಿರುವುದರಿಂದ, ದೇಶದಅಭಿವೃದ್ಧಿಯಲ್ಲಿ ಭಾಗಿಯಾಗುವಂತಹ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಶಿಕ್ಷಣವು ಉತ್ತಮ ಮಾರ್ಗವಾಗಿರುತ್ತದೆ. ಆದ್ದರಿಂದಯಾವುದೇ ವೃತ್ತಿಗೆ ಅವಶ್ಯವಿರುವ ಕೌಶಲ್ಯ, ಸಾಮಥ್ರ್ಯ, ಮನೋಭಾವ, ಬೆಳೆಸುವಂತಹ ಶಿಕ್ಷಣವನ್ನು ಅಳವಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೌಶಲ್ಯ ಅರ್ಹತಾಚೌಕಟ್ಟು (ಓಚಿಣioಟಿಚಿಟ Sಞiಟಟs ಕಿuಚಿಟiಜಿiಛಿಚಿಣioಟಿ ಈಡಿಚಿmeತಿoಡಿಞ) (ಎನ್.ಎಸ್.ಕ್ಯೂ.ಎಫ್) ಎಂಬ ನೂತನ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಈ ಪದ್ಧತಿಯಲ್ಲಿ ಹಾಲಿ ಸಾಮಾನ್ಯ ಶಿಕ್ಷಣದ ಜೊತೆಗೆ ವೃತ್ತಿ ಶಿಕ್ಷಣದ ತರಬೇತಿಯನ್ನು ನೀಡಲಾಗುವುದು. ಇದರಿಂದ ಉದ್ಯೋಗಕ್ಕೆ ಪೂರಕವಾದ ಸಾಮಾನ್ಯ ಕೌಶಲ್ಯಗಳ ತರಬೇತಿಯನ್ನು ಪಡೆಯುವುದರ ಮೂಲಕ, ವಿದ್ಯಾರ್ಥಿಗಳ ಜೀವನೋಪಾಯಕ್ಕೆ ಹಾಗೂ ಉನ್ನತ ಶಿಕ್ಷಣಕ್ಕೆ ಲಭ್ಯವಿರುವ ವಿವಿಧ ಮಾರ್ಗೋಪಾಯಗಳ ಬಗ್ಗೆ ಅರಿವು ಉಂಟಾಗುತ್ತದೆ.ಮತ್ತು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.

                                  ಕೈಗಾರಿಕ ಪ್ರದೇಶ                    ಕೈಗಾರಿಕ ಪ್ರದೇಶ
                                                                                               ಕೈಗಾರಿಕ ಪ್ರದೇಶ ವೀಕ್ಷಣೆ

13. ಸಮನ್ವಯ ಶಿಕ್ಷಣ:

               ವಿಶೇಷ ಅಗತ್ಯತೆಯುಳ್ಳ ಮಕ್ಕಳು ಸಾಮಾನ್ಯ ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ಹಾಗೂ ಇಲಾಖೆ ಕೈಗೊಂಡಿರುವ ಯೋಜನೆಯಡಿಯಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಮಕ್ಕಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದು ಶಿಕ್ಷಕರು, ಪೋಷಕರು, ಖಾಸಗಿ ಸಂಸ್ಥೆಗಳು, ವೈದ್ಯರು ಹಾಗೂ ಸಮುದಾಯದ ಎಲ್ಲಾ ಭಾಗೀದಾರರ ಜವಾಬ್ದಾರಿಯಾಗಿರುತ್ತದೆ. ವೈದ್ಯಕೀಯ ತಪಾಸಣೆ, ಸರಿಪಡಿಸುವ ಶಸ್ತ್ರಚಿಕಿತ್ಸೆ, ಚಿಕಿತ್ಸಕ ಸೇವೆಗಳು, ಸಾಧನ ಸಲಕರಣೆಗಳ ವಿತರಣೆ, ಸಾರಿಗೆ ಮತ್ತು ಬೆಂಗಾವಲು ಭತ್ಯೆ, ಪುಸ್ತಕ ಮತ್ತು ಸ್ಟೇಷನರಿ, ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ, ರೀಡರ್ ಭತ್ಯೆ, ಬ್ರೈಲ್ ಪುಸ್ತಕ, ದೊಡ್ಡ ಮುದ್ರಣದ ಪುಸ್ತಕಗಳು, ಟಿ.ಎಲ್.ಎಂ., ವಿಶೇಷ ಸಂಪನ್ಮೂಲ ಶಿಕ್ಷಕರಿಗೆ ವೇತನ, ಆಡಳಿತಗಾರರಿಗೆ, ಮುಖ್ಯ ಶಿಕ್ಷಕರಿಗೆ ಹಾಗೂ ಪೋಷಕರಿಗೆ ತರಬೇತಿ, ಸಂಪನ್ಮೂಲ ಕೇಂದ್ರಗಳ ಬಲವರ್ಧನೆ, ವಿಶ್ವಅಂಗವಿಕಲ ದಿನಾಚರಣೆ ಆಚರಿಸಿ ವಿಶೇಷ ಅಗತ್ಯತೆಯುಳ್ಳÀ ಮಕ್ಕಳಿಗೆ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸುವುದು, ವಿಶೇಷ ಚೇತನ ಮಕ್ಕಳನ್ನು ವಿಶೇಷ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು.

14. ದೈಹಿಕ ಶಿಕ್ಷಣ:

1. ರಾಮನಗರ ಜಿಲ್ಲೆಯ 107 ಪ್ರೌಢಶಾಲೆಗಳಲ್ಲಿ ಅವಶ್ಯವಿರುವ ಕ್ರೀಡಾ ಸಾಮಗ್ರಿಗಳು ಲಭ್ಯವಿರುತ್ತವೆ.
2.ಸ.ಕಿ.ಪ್ರಾ / ಸ.ಹಿ.ಪ್ರಾ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಖರೀದಿಗೆ ಅಂದಾಜು ಪ್ರತಿ ಶಾಲೆಗೆ ರೂ. 10000/- ರಂತೆ ನೀಡಬಹುದಾಗಿದೆ.
3.ಶಿಕ್ಷಕರನ್ನು ನಿಯೋಜನೆ ಮಾಡುವ ಮೂಲಕ ತರಬೇತಿ ನೀಡಲು ಬಳಸಿಕೊಳ್ಳಬಹುದು.
4.2019-20ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಡಯಟ್ ನಲ್ಲಿ ನಡೆದ ಈiಣ Iಟಿಜiಚಿ ಒovemeಟಿಣ ತರಬೇತಿ ಶಿಬಿರದಲ್ಲಿ ರಾಮನಗರ ಜಿಲ್ಲೆಯಿಂದ ಸುಮಾರು(4 ತಾಲ್ಲೂಕಿನಿಂದ) 20 ಜನ           ಶಿಕ್ಷಕರು ಭಾಗವಹಿಸಿರುತ್ತಾರೆ.
5.ಯೋಗ ತರಬೇತಿಯು ದೈಹಿಕ ಶಿಕ್ಷಣ ಶಿಕ್ಷಕರ ಜೊತೆಗೆ ಸಹ ಶಿಕ್ಷಕರಿಗೂ ಅವಶ್ಯವಿರುತ್ತದೆ.
6.ಪುನಶ್ಚೇತನ ತರಬೇತಿಗಳು: ಈiಣ Iಟಿಜiಚಿ ಒovemeಟಿಣ ತರಬೇತಿ ಜೊತೆಗೆ, ಆಯಾ ಗುಂಪು ಆಟಗಳಿಗೆ ಸಂಬಂಧಿಸಿದಂತೆ ತರಬೇತಿಗಳ ಅವಶ್ಯವಿರುತ್ತದೆ.
7.ಶೈಕ್ಷಣಿಕ ಪ್ರವಾಸವು ದೈಹಿಕ ಶಿಕ್ಷಣ ಶಿಕ್ಷಕರಿಗೆ ಅವಶ್ಯಕವಿದ್ದು, ಕ್ರೀಡೆಗಳಿಗೆ ಸಂಬಂಧಿಸಿದ ಸ್ಟೇಡಿಯಂಗಳು, ಯೋಗ ತರಬೇತಿ ಕೇಂದ್ರಗಳು ಹಾಗೂ ಅಲ್ಲಿನ ಸೌಲಭ್ಯಗಳ ಬಗ್ಗೆ ಅರಿಯಲು           ಸಹಕಾರಿಯಾಗುವುದು.

15. ಶಿಕ್ಷಕರ ತರಬೇತಿ:

1. ಜಿಲ್ಲಾ ಹಂತದಲ್ಲಿ ನೀಡಲಾದ ತರಬೇತಿ ವಿವರ
2. ರಾಜ್ಯ ಹಂತದಿಂದ ನೀಡಲಾಗುವ ತರಬೇತಿಯನ್ನು ಹೊರತುಪಡಿಸಿ, ರಾಮನಗರ ಜಿಲ್ಲೆಯಲ್ಲಿ English Phonotics ಸಂಬಂಧಿಸಿದಂತೆ Jolly Phonics ತರಬೇತಿಯನ್ನು  NGO                             ಸಹಕಾರದೊಂದಿಗೆ, 1-3 ನೇ ತರಗತಿಯಲ್ಲಿ ಆಂಗ್ಲಭಾಷೆಯನ್ನು ಬೋಧಿಸುತ್ತಿರುವ ಶಿಕ್ಷಕರಿಗೆ ನೀಡಲಾಗಿದೆ.
3. ಮಕ್ಕಳಿಗೆ ಫೋನೆಟಿಕ್ ಉಚ್ಚಾರಣೆ ಮುಖಾಂತರ ಅಕ್ಷರಗಳನ್ನು ಕಲಿಸಿದರೆ ಪದಗಳನ್ನು ಸುಲಭವಾಗಿ ಓದಲು ಸಾಧ್ಯವಾಗುತ್ತದೆ.
4.ದಿನಾಂಕ:18/11/2019 ರಿಂದ 20/11/2019 ರವರೆಗೆ ತರಬೇತಿಯನ್ನು ರಾಮನಗರ ಜಿಲ್ಲೆಯ 4 ಬ್ಲಾಕ್‍ಗಳಲ್ಲಿ ನೀಡಲಾಯಿತು.
5. ಸದರಿ ತರಬೇತಿಯು ಚಟುವಟಿಕೆ ಆಧಾರಿತ ತರಬೇತಿಯಾಗಿದ್ದು, ಶಿಕ್ಷಕರು ಪೂರ್ಣವಾಗಿ ತೊಡಗಿಸಿಕೊಂಡು ಸಕ್ರಿಯವಾಗಿ ಭಾಗವಹಿಸಿದರು.
6. ಪ್ರಸ್ತುತ ಈ ತರಬೇತಿಯ ಚಟುವಟಿಕೆಗಳನ್ನು ಶಿಕ್ಷಕರು ಮಕ್ಕಳಿಗೆ ತರಗತಿಯಲ್ಲಿ ಅನುಷ್ಠಾನಗೊಳಿಸಿದ್ದು, ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ಕಾಣಬಹುದಾಗಿದೆ.
7. ಈ ತರಬೇತಿಗೆ ಸಂಬಂಧಿಸಿದಂತೆ ಕಲಿಕೋಪಕರಣಗಳನ್ನು ಸರಬರಾಜು ಮಾಡಿರುತ್ತಾರೆ. ಈ ಕಲಿಕೋಪಕರಣಗಳು ಮಕ್ಕಳು ಬಳಸಲು ಉಪಯುಕ್ತವಾಗಿವೆ.

                                   ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದ ಜಾಲಿ ಫೋನಿಕ್ಸ್ ತರಬೇತಿ ತರಬೇತಿ                                    ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದ ಜಾಲಿ ಫೋನಿಕ್ಸ್ ತರಬೇತಿ ತರಬೇತಿ
                                    ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದ ಜಾಲಿ ಫೋನಿಕ್ಸ್ ತರಬೇತಿ ತರಬೇತಿಯ ಚಟುವಟಿಕೆಯಲ್ಲಿ ಭಾಗವಹಿಸಿರುವ ಶಿಕ್ಷಕರು

16. ರಾಮನಗರ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ:

                ಯಾವುದೇ ಒಂದು ಸಮಾಜದ ಸಮತೋಲನವು ಆ ಸಮಾಜದಲ್ಲಿನ ಗಂಡು ಮತ್ತು ಹೆಣ್ಣಿನ ಸಮಾನ ಅಭಿವೃದ್ಧಿಯನ್ನು ಅವಲಂಭಿಸಿದೆ. ಭಾರತದ ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ಗಂಡು ಮತ್ತು ಹೆಣ್ಣಿಗೆ ಸಮಾನವಾದಂತಹ ಸೌಲಭ್ಯಗಳು ಮತ್ತು ಸ್ಥಾನ ಮಾನಗಳನ್ನು ಕಲ್ಪಿಸಲಾಗಿದೆ. ಆದಾಗ್ಯೂ ಇಂದಿನ ದಿನಮಾನಗಳಲ್ಲಿ ಗಂಡು ಹೆಣ್ಣಿನ ನಡುವಿನ ಅನುಪಾತ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ ಹಾಗೂ ಮಹಿಳಾ ಶಿಕ್ಷಣದ ಪ್ರಮಾಣ ಕುಂಠಿತಗೊಳ್ಳುತ್ತಿದೆ ಎಂಬುದನ್ನು ಲಭ್ಯವಿರುವ ಅಂಕಿ-ಅಂಶಗಳನ್ನು ಗಮನಿಸಿದಾಗ ಕಂಡು ಬರುತ್ತದೆ. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಮಹಿಳಾ ಶಿಕ್ಷಣದ ಬಲವರ್ಧನೆಗಾಗಿ ಕೈಗೊಳ್ಳುತ್ತಿವೆ. ಇಂತಹ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ, ಅದರಲ್ಲೂ ಮಹಿಳಾ ಶಿಕ್ಷಣ ಮಟ್ಟ ಗಣನೀಯವಾಗಿ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆ.ಜಿ.ಬಿ.ವಿ) ಮತ್ತು ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆ.ಕೆ.ಜಿ.ಬಿ.ವಿ) ಶಾಲೆಗಳನ್ನು ಆರಂಭಿಸಿ ಗಂಡು ಹೆಣ್ಣಿನ ಅನುಪಾತವನ್ನು ಸಮತೋಲನಗೊಳಿಸುತ್ತಾ ಮಹಿಳಾ ಶಿಕ್ಷಣವನ್ನು ಬಲವರ್ಧನೆಗೊಳಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಎಲ್ಲಾ ಹಂತಗಳಲ್ಲಿ ಜೆಂಡರ್ ಮತ್ತು ಸಾಮಾಜಿಕ ವರ್ಗದ ಅಂತರವನ್ನು ನಿವಾರಿಸುವುದು ಸಮಗ್ರ ಶಿಕ್ಷಣದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ,
                   ಹೆಣ್ಣು ಮಕ್ಕಳ ಶಿಕ್ಷಣವನ್ನು ಪೆÇ್ರೀತ್ಸಾಹಿಸಲು, ಪ್ರಸ್ತುತ ಇರುವ ಹಿರಿಯ ಪ್ರಾಥಮಿಕ ಮಟ್ಟದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಹಾಗೂ ಪ್ರೌಢ ಮಟ್ಟದ ವಿದ್ಯಾರ್ಥಿ ನಿಲಯಗಳನ್ನು ವಿಸ್ತರಿಸಿ ಅಥವಾ ಒಮ್ಮುಖವಾಗಿಸಿ ಈ ಯೋಜನೆಯಡಿ 12ನೇ ತರಗತಿಯವರೆಗೆ ವಸತಿ ಸಹಿತ ಶೈಕ್ಷಣಿಕ ಸೌಕರ್ಯವನ್ನು ಕಲ್ಪಿಸಲಾಗಿದೆ.
ಈ ಯೋಜನೆಯು 10ರಿಂದ 18ವರ್ಷ ವಯೋಮಾನದ (6ರಿಂದ 12ನೇ ತರಗತಿ ಓದಬಯಸುವ) ಪ.ಜಾತಿ, ಪ.ಪಂಗಡ, ಇತರೆ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಮುದಾಯದಂತಹ ಅನನುಕೂಲಕರ ಗುಂಪಿನ ಹೆಣ್ಣು ಮಕ್ಕಳಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ನಿರಂತರವಾಗಿ ಶಿಕ್ಷಣವನ್ನು ಮುಂದುವರಿಸಲು ಯೋಜನೆಯು ಅವಕಾಶವನ್ನು ನೀಡುವುದಲ್ಲದೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತದೆ. ಸಮಗ್ರ ಶಿಕ್ಷಣ ಯೋಜನೆಯು ಈಗಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳನ್ನು ಪ್ರಾಥಮಿಕದಿಂದ12ನೇ ತರಗತಿಯವರೆಗೆ ಉನ್ನತೀಕರಿಸುವ ಪ್ರಸ್ತಾವನೆ ಹೊಂದಿದೆ. ಇದರಿಂದ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‍ಗಳಲ್ಲಿ, ಯಾವುದೇ ಯೋಜನೆಯಲ್ಲಿ ಸನಿವಾಸ ಶಾಲೆಗಳಿಲ್ಲದಿರುವ ಕಡೆ 6ರಿಂದ 12ನೇ ತರಗತಿಯವರೆಗಿನ ಹೆಣ್ಣುಮಕ್ಕಳಿಗೆ ಕನಿಷ್ಠ ಒಂದಾದರೂ ಸನಿವಾಸ ಶಾಲಾ ಸೌಲಭ್ಯವನ್ನು ಒದಗಿಸಿದಂತಾಗುತ್ತದೆ. ಈ ಯೋಜನೆಯ ಉದ್ದೇಶಿತ ಗುರಿಯು 10 ರಿಂದ 18ನೇ ವರ್ಷದ, 6 ರಿಂದ 12ನೇ ತರಗತಿವರೆಗಿನ, ಬಡತನದ ರೇಖೆಗಿಂತ ಕೆಳಗಿರುವ ಪ.ಜಾತಿ, ಪ.ಪಂಗಡ, ಇತರೆ ಹಿಂದುಳಿದ ವರ್ಗದ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಾಗಿದೆ. ಕಟ್ಟಡಕ್ಕಾಗಿ ನೀಡಲಾಗುವ ಅನಾವರ್ತಕ ಅನುದಾನದ ಜೊತೆಗೆ ಮಾನವ ಸಂಪನ್ಮೂಲ ವೆಚ್ಚವನ್ನೂ ಒಳಗೊಂಡಂತೆ ಆವರ್ತಕ ಅನುದಾನವನ್ನು ಸಮಗ್ರ ಶಿಕ್ಷಣ ಯೋಜನೆಯು ಈ ಕೆಳಕಂಡಂತೆ ನೀಡುತ್ತದೆ:

                ಬಿ.ವಿ ಬೈರಪಟ್ನಾ                      ಕೆಜಿಬಿವಿ -4 ಕನಕಪುರ,

                                       ಬಿ.ವಿ ಬೈರಪಟ್ನಾ, ಚನ್ನಪಟ್ಟಣ                                                                ಕೆಜಿಬಿವಿ -4 ಕನಕಪುರ, ಕನಕಪುರ ತಾಲ್ಲೂಕು

17. ಮಧ್ಯಾಹ್ನದ ಉಪಾಹಾರ ಯೋಜನೆ:

                      ಈ ಯೋಜನೆಯ ಮುಖ್ಯ ಉದ್ದೇಶವೆನೇಂದರೆ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಪೌಷ್ಠಿಕಾಂಶವನ್ನು ಹೆಚ್ಚಿಸುವುದರ ಮೂಲಕ ಅವರುಗಳ ಆರೋಗ್ಯ ಹಾಗೂ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವುದಾಗಿರುತ್ತದೆ. ಮುಖ್ಯವಾಗಿ 6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೂ ಶಾಲೆಗೆ ತಪ್ಪದೇ ಹಾಜರಾಗುವಂತೆ ಮಾಡುವುದು ಹಾಗೂ ಸಮಾನತೆಯನ್ನು ಮೂಡಿಸುವ ಉದ್ದೇಶವಾಗಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ದಿನ ನೀಡಬಹುದಾದ ಆಹಾರ ಪದಾರ್ಥಗಳ ವಿವರ ಈ ರೀತಿ ಇರುತ್ತದೆ. ಪ್ರಾಥಮಿಕ ಶಾಲಾ ವಿಭಾಗಕ್ಕೆ ಅಕ್ಕಿ 100 ಗ್ರಾಂ, ಬೇಳೆ 20 ಗ್ರಾ, ತರಕಾರಿ 50 ಗ್ರಾಂ, ಉಪ್ಪು 2 ಗ್ರಾಂ, ಎಣ್ಣೆ 5 ಗ್ರಾಂ, ಇರುತ್ತದೆ. ಅದರಂತೆ ಪ್ರೌಢಶಾಲಾ ವಿಭಾಗಕ್ಕೆ ಅಕ್ಕಿ 150 ಗ್ರಾಂ, ಬೇಳೆ 30 ಗ್ರಾಂ, ತರಕಾರಿ 75 ಗ್ರಾಂ, ಉಪ್ಪು 4 ಗ್ರಾಂ, ಎಣ್ಣೆ 7.5 ಗ್ರಾಂ ನೀಡಲಾಗುತ್ತಿದೆ. ಇದರ ಜೊತೆ ಹೆಚ್ಚುವರಿ ಪೌಷ್ಠಿಕಾಂಶಗಳಾದ ವಿಟಮಿನ್ ‘ಎ’ ಮಾತ್ರೆ 6 ತಿಂಗಳಿಗೆ ಒಂದರಂತೆ ವರ್ಷಕ್ಕೆ 2 ಮಾತ್ರೆಗಳು, ಕಬ್ಬಿಣಾಂಶ ಮಾತ್ರೆಗಳು ವಾರಕ್ಕೆ ಒಂದು ದಿನ ಹಾಗೂ 6 ತಿಂಗಳಿಗೆ ಒಂದರಂತೆ ವರ್ಷಕ್ಕೆ 2 ಜಂತು ನಿವಾರಣಾ ಮಾತ್ರೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 76,369 ಫಲಾನುಭವಿಗಳು ಸೌಲಭ್ಯವನ್ನು ಪಡೆಯುತ್ತಿರುತ್ತಾರೆ. ಒಟ್ಟು 1447 ಅಡುಗೆ ಕೇಂದ್ರಗಳಿದ್ದು, 2368 ಅಡುಗೆ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮ:
             ಕ್ಷೀರ ಭಾಗ್ಯ ಯೋಜನೆಯಡಿ ವಾರದಲ್ಲಿ 05 ದಿನ ಕೆನೆ ಭರಿತ ಹಾಲನ್ನು 01 ರಿಂದ 10ನೇ ತರಗತಿಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಹಾಗೂ ಆರೋಗ್ಯದ ದೃಷ್ಠಿಯಿಂದ ಪೌಷ್ಠಿಕಾಂಶವನ್ನು ಹೆಚ್ಚಿಸಲು ಸಹಕಾರಿಯಾಗಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನವಾಗಿರುತ್ತದೆ.

18. ಸೈಕಲ್ ಸರಬರಾಜು ಮತ್ತು ವಿತರಣೆ:

                   ಸರ್ಕಾರವು ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬೈಸಿಕಲ್ ವಿತರಿಸಲು ಆದೇಶ ಮಾಡಿದೆ. 2019-20ನೇ ಸಾಲಿನಲ್ಲಿ ಕೆಳಕಂಡಂತೆ ಬೈಸಿಕಲ್ ವಿತರಣೆ ಮಾಡಲಾಗಿದೆ.

ಕ್ರ.ಸಂ.

ತಾಲ್ಲೂಕು

ಬೇಡಿಕೆ

ವಿತರಣೆ

ಉಳಿಕೆ

1

ಚನ್ನಪಟ್ಟಣ

1698

1698

0

2

ಕನಕಪುರ

1980

1980

0

3

ಮಾಗಡಿ

1661

1654

6

4

ರಾಮನಗರ

2624

2624

0

ಒಟ್ಟು

7963

7956

06

 19. ಅಥಿತಿ ಶಿಕ್ಷಕರ ಬಗ್ಗೆ:
                  ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರುಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ತಾತ್ಕಾಲಿಕವಾಗಿ ವರ್ಷದ ಅಂತ್ಯದವರಗೆ ಅಥವಾ ಹೊಸ ನೇಮಕಾತಿಯಾಗುವವರಗೆ ಅತಿಥಿ ಶಿಕ್ಷಕರುಗಳನ್ನು ತೆಗೆದುಕೊಳ್ಳಲು ಸರ್ಕಾರವು ಆದೇಶ ಮಾಡಿರುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರುಗಳಿಗೆ 7,500/- ರಂತೆ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರುಗಳಿಗೆ ರೂ 8,000/- ರಂತೆ ಗೌರವ ಸಂಭಾವನೆಯನ್ನು ನೀಡಲಾಗುತ್ತಿದೆ. ಈ ಸಂಬಂಧ 208 ಪ್ರಾಥಮಿಕ ಶಾಲಾ ಶಿಕ್ಷಕರುಗಳು ಹಾಗೂ 25 ಪ್ರೌಡಶಾಲಾ ಶಿಕ್ಷಕರುಗಳನ್ನು ಅತಿಥಿ ಶಿಕ್ಷಕರಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ.

20. ಶುಲ್ಕ ಮರು ಪಾವತಿ:
                 ಸರ್ಕಾರವು ಪ್ರತಿ ವರ್ಷ 6, 7 ಮತ್ತು 8, 9, 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಎಸ್.ಸಿ/ಎಸ್.ಟಿ. ಗಂಡು ಮತ್ತು ಹೆಣ್ಣು ಮಕ್ಕಳು ಹಾಗೂ ಇತರೆ ವರ್ಗದ ಹೆಣ್ಣು ಮಕ್ಕಳಿಗೆ ಶುಲ್ಕ ಮರು ಪಾವತಿ ನೀಡುತ್ತಿದೆ. 2019-20ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮ, ಶುಲ್ಕ ಮರುಪಾವತಿಯಡಿ 8,9,10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಎಸ್.ಸಿ ಹಾಗೂ ಎಸ್.ಟಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಮರುಪಾವತಿಗಾಗಿ ರೂ.42.68 ಲಕ್ಷಗಳು ನಿಗಧಿಯಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಿ ಪಾವತಿ ಮಾಡಲಾಗಿದೆ. ವಿವರ ಕೆಳಕಂಡಂತಿದೆ.

ಕ್ರ.ಸಂ  

ತಾಲ್ಲೂಕು

ಹಂಚಿಕೆ/ಪಾವತಿ ಮಾಡಿರುವ ಕಛೇರಿಯ ವಿಳಾಸ

ಪಾವತಿ ಮಾಡಿರುವ ಮೊತ್ತ

1

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು

27,29,950

2

ಚನ್ನಪಟ್ಟಣ

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಚನ್ನಪಟ್ಟಣ ತಾಲ್ಲೂಕು

3,67,632

3

ರಾಮನಗರ 

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ರಾಮನಗರ ತಾಲ್ಲೂಕು

3,59,915

4

ಮಾಗಡಿ 

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಮಾಗಡಿ ತಾಲ್ಲೂಕು

3,19,297

5

ಕನಕಪುರ 

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಕನಕಪುರ ತಾಲ್ಲೂಕು

4,91,206

ಒಟ್ಟು

42,68,000

21. ಕುವೆಂಪು ಮಾದರಿ ಶಾಲೆ:
           ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಶೆಟ್ಟಿಹಳ್ಳಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುವೆಂಪು ಮಾದರಿ ಶಾಲೆಯನ್ನು ಪ್ರಾರಂಭಿಸಿದ್ದು, 1 ರಿಂದ 7 ನೇ ತರಗತಿಯ ವರೆಗೆ ನಡೆಸಲಾಗುತ್ತಿದೆ.

22. ಉಚಿತ ಸಮವಸ್ತ್ರ ಸರಬರಾಜು:
          2019-20ನೇ ಸಾಲಿಗೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ 1 ರಿಂದ 10ನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಒಟ್ಟು 62300 ಸಮವಸ್ತ್ರಗಳು ಸರಬರಾಜಗಿದ್ದು ಸಂಪೂರ್ಣವಾಗಿ ವಿತರಣೆ ಮಾಡಲಾಗಿದೆ.

ತಾಲ್ಲೂಕು 

ಸರಬರಾಜು ಆಗಿರುವ ಸಮವಸ್ತ್ರಗಳು

ವಿತರಣೆಯಾಗಿರುವ ಸಮವಸ್ತ್ರಗಳು

ಉಳಿಕೆ

ಚನ್ನಪಟ್ಟಣ

14547

14142

405

ಕನಕಪುರ

18161

17421

740

ಮಾಗಡಿ

13734

12127

1607

ರಾಮನಗರ

14568

14568

0

ಒಟ್ಟು

61010

58258

2752

23. ಉಚಿತ ಪಠ್ಯಪುಸ್ತಕ:
            2019-20 ನೇ ಸಾಲಿನಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಟ್ಟು 8,94,155 ಪಠ್ಯ ಪುಸ್ತಕಗಳನ್ನು ಅವಶ್ಯಕತೆಗಳಿಗನುಗುಣವಾಗಿ ಸಂಪೂರ್ಣ ಸರಬರಾಜಾಗಿರುತ್ತದೆ. ಹಾಗೂ ಸ್ವೀಕರಿಸಿರುವ ಎಲ್ಲಾ ಪಠ್ಯಪುಸ್ತಕಗಳನ್ನು ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸರಬರಾಜು ಮಾಡಲಾಗಿರುತ್ತದೆ.

24. ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮ:
         2019-20ರಲ್ಲಿ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದಡಿ ಜಿಲ್ಲೆಯಲ್ಲಿನ ಒಟ್ಟು 22 ಸರ್ಕಾರಿ ಪ್ರೌಡಶಾಲೆಗಳ ದುರಸ್ಥಿಯ ಕಾಮಗಾರಿಯನ್ನು 50.00 ಲಕ್ಷಗಳ ವೆಚ್ಚದಲ್ಲಿ ಹಾಗೂ 67 ಸರ್ಕಾರಿ ಪ್ರಾಥಮಿಕ ಶಾಲೆಗಳ ದುರಸ್ಥಿಯನ್ನು ರೂ 80.00 ಲಕ್ಷಗಳ ವೆಚ್ಚದಲ್ಲಿ ದುರಸ್ಥಿಯನ್ನು ಮಾಡಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿದಂತೆ ಅನುಕೂಲವನ್ನು ಮಾಡಲಾಗಿದೆ.

ಇಲಾಖಾ ಅಂಕಿ ಸಂಖ್ಯೆಗಳು:

ಕ್ರ.
ಸಂ

ತಾಲ್ಲೂಕು

  ಕಿರಿಯ ಪ್ರಾಥಮಿಕ ಶಾಲೆ

ಹಿರಿಯ ಪ್ರಾಥಮಿಕ ಶಾಲೆ

ಪ್ರೌಢಶಾಲೆ

   ಕೆ.ವಿ

ಜ.ನ

ಒಟ್ಟು

ಸರ್ಕಾರಿ

 ಸ.ಕ

ಅನು

ಅನು ರ

ಸರ್ಕಾರಿ

ಸ.ಕ

 ಅನು

ಅನು ರ

ಸರ್ಕಾರಿ

ಸ.ಕ

ಅನು

ಅನು ರ

1

ಚನ್ನಪಟ್ಟಣ

126

0

0

4

97

0

3

23

25

5

13

26

1

0

323

2

ಕನಕಪುರ

273

1

1

8

135

0

11

27

35

9

17

29

0

1

547

3

ಮಾಗಡಿ

234

1

0

5

112

0

6

9

21

6

27

18

0

0

439

4

ರಾಮನಗರ

158

3

0

7

101

0

6

35

26

9

17

45

0

0

407

ಒಟ್ಟು

791

5

1

24

445

0

26

94

107

29

74

118

1

1

1716

   ಶಿಕ್ಷಕರ ಮಾಹಿತಿ:

ಕ್ರ.ಸಂ

ತಾಲ್ಲೂಕು

ಪ್ರಾಥಮಿಕ

ಪ್ರೌಢ

ಮಂ

ಅಗತ್ಯ

ಕಾ.ನಿ

ಒಟ್ಟುಖಾಲಿ

ಹೆಚ್ಚುವರಿ

ನಿಗಧಿತ ಖಾಲಿ

ಮಂ

ಕಾ.ನಿ

ಖಾಲಿ

01

ಕನಕಪುರ

1355

1173

916

257

0

257

331

272

59

02

ರಾಮನಗರ

949

800

758

42

0

42

247

217

30

03

ಮಾಗಡಿ

1157

955

932

23

0

23

204

176

28

04

ಚನ್ನಪಟ್ಟಣ

886

724

768

00

44

00

261

200

61

 

ಒಟ್ಟು

4347

3652

3341

355

44

355

1043

843

200

ಇಲಾಖಾಧಿಕಾರಿಗಳ ಮಾಹಿತಿ:

ಅಧಿಕಾರಿಗಳ ಪದನಾಮ   

ಮೊಬೈಲ್ ಸಂಖ್ಯೆ

ಕಛೇರಿ ದೂರವಾಣಿ ಸಂಖ್ಯೆ

ಇ-ಮೇಲ್ ವಿಳಾಸ

ಉಪನಿರ್ದೇಶಕರು(ಆಡಳಿತ)

9448999440

080-27273708

ddpi.rmgm@gmail.com

ಉಪನಿರ್ದೇಶಕರು(ಅಭಿವೃದ್ಧಿ)

9448999498

080-27273637

dietramanagara@gmail.com

ಡಿ.ವೈ.ಪಿ.ಸಿ, ಎಸ್.ಎಸ್.ಕೆ

9448999449

080-27274551

egovramanagara@gmail.com

ಡಿ.ವೈ.ಪಿ.ಸಿ, ಎಸ್.ಎಸ್.ಕೆ

9449874399

080-27274551

rmsaramanagara@gmail.com

ಬಿ.ಇ.ಒ : ಚನ್ನಪಟ್ಟಣ

9480695320

080-27251418

beocpt08@gmail.com

ಬಿ.ಇ.ಒ ; ಕನಕಪುರ

9480695321

080-27522352

beokkp08@gmail.com

ಬಿ.ಇ.ಒ : ಮಾಗಡಿ

9480695322

080-27745217

beomgd08@gmail.com

ಬಿ.ಇ.ಒ : ರಾಮನಗರ

9480695323

080-27271352

beormgm@gmail.com

ಬಿ.ಆರ್.ಸಿ : ಚನ್ನಪಟ್ಟಣ

9480695324

080-27254086

cptbrc@gmail.com

ಬಿ.ಆರ್.ಸಿ : ಕನಕಪುರ

9480695325

080-27522846

brckkp08@gmail.com

ಬಿ.ಆರ್.ಸಿ : ಮಾಗಡಿ

9448999488

080-27745729

brcmgd15@gmail.com

ಬಿ.ಆರ್.ಸಿ : ರಾಮನಗರ

9480695327

080-27273517

brcrmgm@gmail.com

 

ಮಾಹಿತಿ ಹಕ್ಕು ಅಧಿನಿಯಮ:
                          ಭಾರತ ಸರ್ಕಾರವು ಜಾರಿಗೆ ತಂದಿರುವ 2005ರ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಹಕ್ಕು ಅಧಿನಿಯಮ 2005ರ ಸೆಕ್ಷನ್ 5(1) 5(2) ಮತ್ತು 19(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಹಂತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರುವ ವ್ಯಕ್ತಿಗಳಿಗೆ ಅಂತಹ ಮಾಹಿತಿಯನ್ನು ಮೇಲಿನ ಕಾಯ್ದೆಯನ್ವಯ ಒದಗಿಸಲು ಮಾಹಿತಿ ಕೋರಿರುವ ಅರ್ಜಿಗಳು ಅಥವಾ ಮೇಲ್ಮನವಿಗಳನ್ನು ಸ್ವೀಕರಿಸಲು ಅನುಕ್ರಮವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನಾಗಿ ಈ ಕೆಳಕಂಡಂತೆ ಸರ್ಕಾರದಿಂದ ನೇಮಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ಹಕ್ಕು ಅಧಿಕಾರಿಗಳ ವಿವರ
ಸರ್ಕಾರದ ಅಧೀನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ (ಆಡಳಿತ), ಬೆಂಗಳೂರುರವರ ಅಧಿಸೂಚನೆ ಸಂಖ್ಯೆ : ಇಡಿ /17/ಪಿಡಿಬಿ/2015 ದಿನಾಂಕ : 20/02/2016 ರ ಪ್ರಕಾರ, ಮಾಹಿತಿ ಹಕ್ಕು ಅಧಿಕಾರಿಗಳ ಪ್ರತ್ಯಾಯೋಜನೆ ಪರಿಷ್ಕøತ ಪಟ್ಟಿ

ಕ್ರ. ಸಂ.  

ಸಾರ್ವಜನಿಕ ಮಾಹಿತಿ ಪ್ರಾಧಿಕಾರ

ಸಾರ್ವಜನಿಕ ಮಾಹಿತಿ ಅಧಿಕಾರಿ

(ಸೆಕ್ಷನ್ 5(1) ರನ್ವಯ)

 

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
(ಸೆಕ್ಷನ್ 5(2) ರನ್ವಯ)

ಮೊದಲನೇ ಮೇಲ್ಮನವಿ ಪ್ರಾಧಿಕಾರ
(ಸೆಕ್ಷನ್ 19(1) ರನ್ವಯ)

ಎರಡನೇ ಮೇಲ್ಮನವಿ ಪ್ರಾಧಿಕಾರ

1

ಸರ್ಕಾರಿ / ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ 

ಶಾಲಾ ಮುಖ್ಯಶಿಕ್ಷಕರು – 

ಕ್ಷೇತ್ರ ಶಿಕ್ಷಣಾಧಿಕಾರಿಗಳು 

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

2

ಸರ್ಕಾರಿ / ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 

ಶಾಲಾ ಮುಖ್ಯಶಿಕ್ಷಕರು 

ಶಾಲೆಯ ಹಿರಿಯ ಶಿಕ್ಷಕರು 

ಕ್ಷೇತ್ರ ಶಿಕ್ಷಣಾಧಿಕಾರಿಗಳು 

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

3

ಸರ್ಕಾರಿ / ಅನುದಾನಿತ ಪ್ರೌಢಶಾಲೆ  ವಿಷಯ  

ಶಾಲಾ ಮುಖ್ಯಶಿಕ್ಷಕರು

ನಿರ್ವಾಹಕರು / ಹಿರಿಯ ಶಿಕ್ಷಕರು

ಕ್ಷೇತ್ರ ಶಿಕ್ಷಣಾಧಿಕಾರಿಗಳು 

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

4

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ   

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ

ಕ್ಷೇತ್ರ ಸಂಪನ್ಮೂಲ ವ್ಯಕ್ತಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು 

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

5

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ   

ಪತ್ರಾಂಕಿತ ವ್ಯವಸ್ಥಾಪಕರು

ಸಂಬಂಧಿಸಿದ ಶಾಖಾ ಅಧೀಕ್ಷಕರು

ಕ್ಷೇತ್ರ ಶಿಕ್ಷಣಾಧಿಕಾರಿಗಳು 

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

6

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ 

ಯೋಜನಾ ಉಪಸಮನ್ವಯಾ ಧಿಕಾರಿ

(DYPC)

ಲೆಕ್ಕಅಧೀಕ್ಷಕರುÄ

ಯೋಜನಾ ಸಮನ್ವಯಾಧಿಕಾರಿ

(DPO)

ಮಾಹಿತಿ ಹಕ್ಕು ಆಯೋಗ, ಬೆಂಗಳೂರು

7

ಉಪನಿರ್ದೇಶಕರು (ಆಡಳಿತ) ರವರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ 

ಪತ್ರಾಂಕಿತ ಸಹಾಯಕರು / ಪತ್ರಾಂಕಿತ ವ್ಯವಸ್ಥಾಪಕರು

ಸಂಬಂಧಿಸಿದ ಶಾಖಾ ಅಧೀಕ್ಷಕರು

ಉಪನಿರ್ದೇಶಕರು (ಆಡಳಿತ)

ಮಾಹಿತಿ ಹಕ್ಕು ಆಯೋಗ, ಬೆಂಗಳೂರು